Monday, January 19, 2026

ದಿನಾಂಕ: 17.1.2026ರಂದು ನಡೆದ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಫೊಟೋ ಮತ್ತು ವರದಿ

 








ಸಂಶೋಧನೆಯಲ್ಲಿ ಭಾಷೆಯ ಆಳಕ್ಕೆ ಇಳಿದು ಅರ್ಥದ ಅನುಸಂಧಾನ ಮಾಡುವುದು ಅಗತ್ಯ
                                                                                                                 -ಡಾ. ಬಿ.ಎ. ವಿವೇಕ ರೈ


ಸಂಶೋಧನೆ ಎಂದರೆ ಇರುವುದನ್ನೇ ಚಂದಮಾಡಿ ಬರೆಯುವುದಲ್ಲ ಹಾಗೆ ಮಾಡಿದರೆ ಸಂಶೋಧನೆಯಲ್ಲಿ ಯಾವ ಸತ್ತ್ವವೂ ಇರುವುದಿಲ್ಲ. ಸಂಶೋಧನೆಯಲ್ಲಿ ಭಾಷೆಯ ಆಳಕ್ಕೆ ಇಳಿದು ಅರ್ಥದ ಅನುಸಂಧಾನ ನಡೆಯಬೇಕು ಎಂದು ವಿಶ್ರಾಂತ ಕುಲಪತಿ ಡಾ. ಬಿ. ಎ.ವಿವೇಕ ರೈ ಹೇಳಿದರು. ಅವರು ದಿನಾಂಕ: ೧೭.೧.೨೦೨೬ರಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮಾಹೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮಪ್ಪಯ್ಯ ಪ್ರಶಸ್ತಿ ಸಮಿತಿ, ಮಂಗಳೂರು ಇವರ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದರು. ಗೋವಿಂದ ಪೈ ಮುಳಿಯ ತಿಮ್ಮಪ್ಪಯ್ಯ, ಪಂಚಮಂಗೇಶ ರಾಯರು, ಸೇಡಿಯಾಪು ಕೃಷ್ಣಭಟ್ ಮೊದಲಾದವರು ಸಂಶೋಧನೆ ಮತ್ತು ಕಾವ್ಯ ಎರಡು ಕ್ಷೇತ್ರದಲ್ಲಿ ಸಮಾನವಾಗಿ ಕೆಲಸ ಮಡಿದ್ದಾರೆ. ಕರಾವಳಿ ಜಿಲ್ಲೆಯ ಲೇಖನಗಳಲ್ಲಿ ಮಣ್ಣಿನ ಸತ್ತ್ವವಿದೆ. ನೆಲದ ಮೂಲಕ ಕಾವ್ಯ ಕಟ್ಟಿದ್ದಾರೆ. ಆದರೆ ಯುವ ಜನತೆ ಮುಳಿಯ ತಿಮ್ಮಪ್ಪಯ್ಯ ಅವರ ಬಗ್ಗೆ ತಿಳಿಯುವ ಪ್ರಯತ್ನ ನಡೆಸುತ್ತಿಲ್ಲ. ಅವರ ಕುರಿತಾಗಿ ಓದಿಯೂ ಇಲ್ಲ. ಹೀಗಾಗಿ ಯುವ ಸಮುದಾಯಕ್ಕೆ ಅವರನ್ನು  ಪರಿಚಯಿಸುವ ಕಾರ್ಯ ಮಾಡಬೇಕು. ಸರಕಾರದ ಅನುದಾನದ ಮೂಲಕ ಚದುರಿ ಹೋಗಿರುವ ಅವರ ಅನೇಕ ಕೃತಿಗಳನ್ನು ಒಟ್ಟುಗೂಡಿಸಿ ಸಮಗ್ರ ಸಂಪುಟ ಹೊರತರಬೇಕು ಎಂದರು.

ಡಾ. ಗಿರಿಜಾ ಶಾಸ್ತ್ರಿ ಅವರು ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸ್ವೀಕರಿಸಿ ತಮ್ಮ ಸಂಶೋಧನೆಯ ಬಗ್ಗೆ ತಿಳಿಸಿದರು. ನಿವೃತ್ತ ಪ್ರಾಧ್ಯಾಪಿಕೆ ಡಾ. ಸರಸ್ವತಿ ಕುಮಾರಿ ಅಭಿನಂದನಾ ಭಾಷಣ ಮಾಡಿದರು. ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಡಾ. ನಾ ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಳಿಯ ತಿಮ್ಮಪ್ಪಯ್ಯ ಅವರ ಮಕ್ಕಳಾದ ಗೋಪಾಲಕೃಷ್ಣ ಭಟ್ ಹಾಗೂ ಮುಳಿಯ ರಾಘವಯ್ಯ ಮತ್ತು ಅವರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರಂಭದಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ರಾಷ್ಟಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಎಂ.ಜಿ.ಎಂ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು.. ಮುಳಿಯ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿಯಾದ ಡಾ. ನರಸಿಂಹ ಮೂರ್ತಿ  ವಂದಿಸಿದರು.

No comments: