Monday, April 27, 2026

೨೦೨೬-೨೭ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಲಕ್ಷ್ಮಣ ವಿ.ಎ ಅವರ “ಗೋಡೆಗೆ ನೇತುಬಿದ್ದ ಭೂಪಟ’ ಕವನಸಂಕಲನ ಆಯ್ಕೆ

 

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಮಣಿಪಾಲ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯು  ಬೆಂಗಳೂರಿನಲ್ಲಿ ವೈದ್ಯರಾಗಿರುವ ಡಾ. ಲಕ್ಷ್ಮಣ ವಿ. ಅವರ ಗೋಡೆಗೆ ನೇತುಬಿದ್ದ ಭೂಪಟ’ ಕವನಸಂಕಲನಕ್ಕೆ ಲಭಿಸಿದೆ. ಪ್ರಶಸ್ತಿಯು ೧೦೦೦೦/- ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿಪ್ರದಾನ ಕಾರ್ಯಕ್ರಮವು ಆಗಸ್ಟ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಡಾ. ಲಕ್ಷ್ಮಣ ವಿ. ಮೂಲತಃ ಬೆಳಗಾವಿ ಜಿಲ್ಲೆ ಅಥಣಿ (ಈಗಿನ ಕಾಗವಾಡತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದುಕವನಸಂಕಲನ, ಗದ್ಯ ಮತ್ತು ಅಂಕಣ ಬರಹಗಳಲ್ಲಿ ವಿಶೇಷ ಆಸಕ್ತಿಯನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಹಲವಾರು ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ” ಇವರ ಪ್ರಥಮ ಕವನ ಸಂಕಲನಅಪ್ಪನ ಅಂಗಿ, ಗರ್ದಿ ಗಮ್ಮತ್ತು’, ನೋಡಾ ಗೋಳ ಗುಮ್ಮಟ ನೋಡಾ’, ಮಿಲ್ಟ್ರಿ ಟ್ರಂಕು”, ಕಾಯಿನ್ ಬೂತ್”, ಪರಿಮಳದ ಬಾಕಿ ಮೊತ್ತ”ಮುಂತಾದುವು ಇವರ ಪ್ರಕಟಿತ ಕವನ ಸಂಕಲನಗಳುಬಂಡೆ ಬಸಪ್ಪನ ದೊಡ್ಡಿ ಎಂಬ ಕಥೆಯ ಬೆಳಗಾವಿಯ ರಾಣಿ ಚೆನ್ನಮ್ಮ ಮಹಿಳಾ ವಿ.ವಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆಬಸಣ್ಣನ ಸರ್ತಿ ಸೈಕಲ್ ಕಥೆ ಮಂಗಳೂರು ವಿ.ವಿ, ಆಳ್ವಾಸ್ ವಿ.ವಿಯ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಕವನಸಂಕಲನಗಳಿಗೆ ಕಣವಿ ಕಾವ್ಯ ಪ್ರಶಸ್ತಿ, ವೀಚಿ ಪ್ರಶಸ್ತಿ, ವಿಭಾ ಕಾವ್ಯ ಪ್ರಶಸ್ತಿ, ಅಡ್ವೈಜರ್ ಪ್ರಶಸ್ತಿ, ಸವದತ್ತಿ ಸಹೃದಯ ಕಾವ್ಯ ಪ್ರಶಸ್ತಿ, ಹೊತ್ತಿಗೆ ಕಾವ್ಯ ಪುರಸ್ಕಾರಗಳಲ್ಲದೆ ಹಲವಾರು ದತ್ತಿ ಬಹುಮಾನಗಳು  ಲಭಿಸಿವೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರಹ, ಕತೆ, ಕವನ, ವೈಚಾರಿಕ ಬರಹ, ಪ್ರಬಂಧ ಬರಹ ಹಾಗೂ ಅನುಭವ ಕಥನಗಳು ಪ್ರಕಟವಾಗಿವೆ. ಪಿ.ಎಚ್.ಸಿ ಕವಲುಗುಡ್ಡ ಅವರ ಇತ್ತೀಚಿನ ಕಾದಂಬರಿಅಲ್ಲದೆ 'ನಸುಕು' (nasuku.com) ವೆಬ್‌ಸೈಟ್‌ನ ಸಂಪಾದಕತ್ವದಲ್ಲಿ ಸಕ್ರಿಯರಾಗಿದ್ದಾರೆ.

ಯಕ್ಷಗಾನ ಕೇಂದ್ರ ಇಂದ್ರಾಳಿ, ದಿನಾಂಕ: 16.04.2026 ರಿಂದ 25.04.2026ರವರೆಗೆ ಹಮ್ಮಿಕೊಂಡ ಬೇಸಿಗೆ ಶಿಬಿರ (ಹೆಜ್ಜೆಗಾರಿಕೆ, ಬಣ್ಣಗಾರಿಕೆ, ವೇಷಭೂಷಣ)ದ ಸಮಾರೋಪ ಸಮಾರಂಭ

 








ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ ವತಿಯಿಂದ ಯಕ್ಷಗಾನ ಹೆಜ್ಜೆಗಾರಿಕೆ, ವೇಷಭೂಷಣ ಮತ್ತು ಬಣ್ಣಗಾರಿಕೆಯನ್ನೊಳಗೊಂಡ ಬೇಸಿಗೆ ಶಿಬಿರವು ದಿನಾಂಕ: ೧೬.೦೪.೨೦೨೬ರಿಂದ ಆರಂಭಗೊಂಡು ಅದರ ಸಮಾರೋಪ ಸಮಾರಂಭವು ದಿನಾಂಕ:೨೫.೦೪.೨೦೨೬ರಂದು ಆಯೋಜನೆಗೊಂಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹೆಯ ಕುಲಸಚಿವರಾದ ಡಾ. ಪಿ. ಗಿರಿಧರ ಕಿಣಿ ಅವರು ಭಾಗವಹಿಸಿದ್ದರು. ಅವರು ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ವಿದ್ಯಾರ್ಥಿಗಳು ತಮ್ಮ ರಜಾ ಅವಧಿಯಲ್ಲಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಅಗತ್ಯತೆಯ ಬಗ್ಗೆ ತಿಳಿಸಿ, ಇದು ಅವರ ಶಾಲಾ ಕಲಿಕೆಯೊಂದಿಗೆ ನಮ್ಮ  ಕಲೆ ಹಾಗೂ ಪರಂಪರೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಸಮಯದ ಸದುಪಯೋಗವಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆಯವರು ವಹಿಸಿದ್ದರು. ಸಭೆಯಲ್ಲಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾದ  ಪ್ರೊ. ಎಸ್.ವಿ ಉದಯಕುಮಾರ್ ಶೆಟ್ಟಿ, ಶ್ರೀ ಮಂಜುನಾಥ ಮಯ್ಯ ಹಾಗೂ ಶ್ರೀಮತಿ ಮೀನಾಲಕ್ಷಿಣಿ ಅಡ್ಯಂತಾಯ ಹಾಗೂ ಕೇಂದ್ರದ ಗುರುಗಳು ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ  ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಸಮರ್ಪಿಸಿದರುಆರಂಭದಲ್ಲಿ ಬೇಸಿಗೆ ಶಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಶಿಬಿರಾರ್ಥಿಗಳು ಹಾಗೂ ಪೋಷಕರು ಶಿಬಿರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು 


Thursday, April 16, 2026

ದಿನಾಂಕ: 15.04.2026ರಂದು ನಡೆದ ವಿ .ಎಂ. ಇನಾಂದಾರ್ ಪ್ರಶಸ್ತಿ ಕಾರ್ಯಕ್ರಮ

 












ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಕೊಡಮಾಡುವ 2025ನೇ ಸಾಲಿನ ಇನಾಂದಾರ್ ಪ್ರಶಸ್ತಿಯನ್ನು ಪ್ರಸಿದ್ಧ ಲೇಖಕಿ ಡಾ. ಗೀತಾ ವಸಂತ ಅವರ ತೆರೆದಷ್ಟೂ ಅರಿವು ಸಾಹಿತ್ಯಕ ಒಳನೋಟಗಳು ವಿಮರ್ಶಾ ಕೃತಿಗೆ ಎಂ.ಜಿ.ಎಂ ಕಾಲೇಜಿನ ಮುದ್ದಣ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತುಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಸಾಹಿತ್ಯ ಪರಂಪರೆಯ ಘನತೆಯನ್ನು, ಸೃಜನಶೀಲತೆಯ ವಿರಾಟ್ ಸ್ವರೂಪವನ್ನು ಮನದಲ್ಲಿಟ್ಟುಕೊಂಡು ವಿಮರ್ಶೆ ನಡೆಸಬೇಕಾಗುತ್ತದೆ. ಸಾಂಸ್ಕöÈತಿಕ ಸತ್ಯದ ಒಳಹರಿವನ್ನು ಕಂಡುಹಿಡಿಯುವ ಕಣ್ಣು ವಿಮರ್ಶಕನಿಗೆ ಇರಬೇಕು. ವಿಮರ್ಶೆ ಎನ್ನುವುದು ದೊಡ್ಡ ಸಾಂಸ್ಕöÈತಿಕ ಜವಾಬ್ದಾರಿ, ನೋಡುವುದು, ತೋರುವುದು, ಕಾಣುವುದು ಬೇರೆ ಬೇರೆ ಇರುತ್ತದೆ. ಅದುವೇ ಕಾಣ್ಕೆ, ನೋಟ ಕ್ರಮಗಳನ್ನು ಸೃಷ್ಟಿಸುವುದು ವಿಮರ್ಶೆಯ ಕೆಲಸ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಮಾತನಾಡಿ, ಸಾಮಾನ್ಯ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದೇ ಮಾನವ ಸಂಪನ್ಮೂಲ. ಅದರ ಅಭಿವೃದ್ಧಿಯಲ್ಲಿ ಸಾಹಿತ್ಯದ ಪಾತ್ರ ಹಿರಿದು, ಜ್ಞಾನ, ಕೌಶಲ, ಮೌಲ್ಯವನ್ನು ಸಾಹಿತ್ಯ ಒಳಗೊಂಡಿರುತ್ತದೆ. ಮೂಲಕ ವ್ಯಕ್ತಿತ್ವವನ್ನು ರೂಪಿಸಲು ಅದು ಸಹಕಾರಿಯಾಗಿದೆ ಎಂದರುಕಲ್ಪನಾಂಶ, ಭಾವಾಂಶ, ರೂಪಾಂಶ, ಬೌದ್ಧಿಕಾಂಶಗಳು ಸಾಹಿತ್ಯದ ನಾಲ್ಕು ಅಂಶಗಳು. ಮುದ್ದಣನ ಸಾಹಿತ್ಯದಲ್ಲಿ ಅವುಗಳನ್ನು ಕಾಣಬಹುದು. ಆಧುನಿಕ ಸಾಹಿತ್ಯ ಪ್ರವೇಶವಾದ ಕುರುಹನ್ನು ಮುದ್ದಣನ ಸಾಹಿತ್ಯದಲ್ಲಿ ನೋಡಬಹುದು. ವಿಮರ್ಶಕನ ದೃಷ್ಟಿಯಿಂದ ಸಂವಾದದ ದೃಷ್ಟಿಯಿಂದ ಮುದ್ದಣನು ತನ್ನ ರಾಮಾಶ್ವಮೇಧ ಕೃತಿಯನ್ನು ರಚಿಸಿದ್ದಾನೆ. ಆವನ ಕಾವ್ಯದ ಶೈಲಿ, ವೈಶಿಷ್ಟ÷್ಯಗಳು ಮುಂದಿನ ಕವಿಗಳಿಗೆ ಹೊಸ ಪ್ರಕಾರ ಸೃಷ್ಟಿಸಲು ಪ್ರೇರಣೆಯಾಯಿತು ಎಂದರು. ಆಧುನಿಕ ಸಾಹಿತ್ಯವು ಪ್ರಜಾಪ್ರಭುತ್ವದ ಚಿಂತನಾ ಕ್ರಮದಿಂದ ಪ್ರಶ್ನಿಸುವ ಮನೋಭಾವವನ್ನು ಹುಟ್ಟುಹಾಕಿದೆ. ಮುದ್ದಣನ ಕಾವ್ಯದಲ್ಲಿ ಪ್ರಶಿಸುವ ಮನೋಭಾವವಿದೆ ಎಂದು ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಅವರು ವಿ.ಎಂ ಇನಾಂದಾರ್ ವಿಮರ್ಶಾ ಪ್ರಶಸ್ತಿ ಪುರಸ್ಕöÈತರ ಪರಿಚಯ, ಕೃತಿ ವಿಶ್ಲೇಷಣೆ ಗೈದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಛಲ, ಪರಿಶ್ರಮ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕವಿ ಮುದ್ದಣ ಸಾಕ್ಷಿ ಎಂದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಎಂ. ವಿಶ್ವನಾಥ ಪೈ ಮಾತನಾಡಿ ಮುದ್ದಣನ ಎಲ್ಲಾ ಕೃತಿಗಳ ಡಿಜಿಟಲೀಕರಣವಾಗಬೇಕು ಎಂದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಾಲತಿ ದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತ್ರಿವೇಣಿ ಪ್ರಶಸ್ತಿ ಪತ್ರ ವಾಚಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಅಂಬಿಕಾ ನಿರೂಪಿಸಿದರು. ಶ್ರೀಧರ ರಾವ್ ವಂದಿಸಿದರು.