Thursday, April 16, 2026

ದಿನಾಂಕ: 15.04.2026ರಂದು ನಡೆದ ವಿ .ಎಂ. ಇನಾಂದಾರ್ ಪ್ರಶಸ್ತಿ ಕಾರ್ಯಕ್ರಮ

 












ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಕೊಡಮಾಡುವ 2025ನೇ ಸಾಲಿನ ಇನಾಂದಾರ್ ಪ್ರಶಸ್ತಿಯನ್ನು ಪ್ರಸಿದ್ಧ ಲೇಖಕಿ ಡಾ. ಗೀತಾ ವಸಂತ ಅವರ ತೆರೆದಷ್ಟೂ ಅರಿವು ಸಾಹಿತ್ಯಕ ಒಳನೋಟಗಳು ವಿಮರ್ಶಾ ಕೃತಿಗೆ ಎಂ.ಜಿ.ಎಂ ಕಾಲೇಜಿನ ಮುದ್ದಣ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತುಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಸಾಹಿತ್ಯ ಪರಂಪರೆಯ ಘನತೆಯನ್ನು, ಸೃಜನಶೀಲತೆಯ ವಿರಾಟ್ ಸ್ವರೂಪವನ್ನು ಮನದಲ್ಲಿಟ್ಟುಕೊಂಡು ವಿಮರ್ಶೆ ನಡೆಸಬೇಕಾಗುತ್ತದೆ. ಸಾಂಸ್ಕöÈತಿಕ ಸತ್ಯದ ಒಳಹರಿವನ್ನು ಕಂಡುಹಿಡಿಯುವ ಕಣ್ಣು ವಿಮರ್ಶಕನಿಗೆ ಇರಬೇಕು. ವಿಮರ್ಶೆ ಎನ್ನುವುದು ದೊಡ್ಡ ಸಾಂಸ್ಕöÈತಿಕ ಜವಾಬ್ದಾರಿ, ನೋಡುವುದು, ತೋರುವುದು, ಕಾಣುವುದು ಬೇರೆ ಬೇರೆ ಇರುತ್ತದೆ. ಅದುವೇ ಕಾಣ್ಕೆ, ನೋಟ ಕ್ರಮಗಳನ್ನು ಸೃಷ್ಟಿಸುವುದು ವಿಮರ್ಶೆಯ ಕೆಲಸ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಮಾತನಾಡಿ, ಸಾಮಾನ್ಯ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದೇ ಮಾನವ ಸಂಪನ್ಮೂಲ. ಅದರ ಅಭಿವೃದ್ಧಿಯಲ್ಲಿ ಸಾಹಿತ್ಯದ ಪಾತ್ರ ಹಿರಿದು, ಜ್ಞಾನ, ಕೌಶಲ, ಮೌಲ್ಯವನ್ನು ಸಾಹಿತ್ಯ ಒಳಗೊಂಡಿರುತ್ತದೆ. ಮೂಲಕ ವ್ಯಕ್ತಿತ್ವವನ್ನು ರೂಪಿಸಲು ಅದು ಸಹಕಾರಿಯಾಗಿದೆ ಎಂದರುಕಲ್ಪನಾಂಶ, ಭಾವಾಂಶ, ರೂಪಾಂಶ, ಬೌದ್ಧಿಕಾಂಶಗಳು ಸಾಹಿತ್ಯದ ನಾಲ್ಕು ಅಂಶಗಳು. ಮುದ್ದಣನ ಸಾಹಿತ್ಯದಲ್ಲಿ ಅವುಗಳನ್ನು ಕಾಣಬಹುದು. ಆಧುನಿಕ ಸಾಹಿತ್ಯ ಪ್ರವೇಶವಾದ ಕುರುಹನ್ನು ಮುದ್ದಣನ ಸಾಹಿತ್ಯದಲ್ಲಿ ನೋಡಬಹುದು. ವಿಮರ್ಶಕನ ದೃಷ್ಟಿಯಿಂದ ಸಂವಾದದ ದೃಷ್ಟಿಯಿಂದ ಮುದ್ದಣನು ತನ್ನ ರಾಮಾಶ್ವಮೇಧ ಕೃತಿಯನ್ನು ರಚಿಸಿದ್ದಾನೆ. ಆವನ ಕಾವ್ಯದ ಶೈಲಿ, ವೈಶಿಷ್ಟ÷್ಯಗಳು ಮುಂದಿನ ಕವಿಗಳಿಗೆ ಹೊಸ ಪ್ರಕಾರ ಸೃಷ್ಟಿಸಲು ಪ್ರೇರಣೆಯಾಯಿತು ಎಂದರು. ಆಧುನಿಕ ಸಾಹಿತ್ಯವು ಪ್ರಜಾಪ್ರಭುತ್ವದ ಚಿಂತನಾ ಕ್ರಮದಿಂದ ಪ್ರಶ್ನಿಸುವ ಮನೋಭಾವವನ್ನು ಹುಟ್ಟುಹಾಕಿದೆ. ಮುದ್ದಣನ ಕಾವ್ಯದಲ್ಲಿ ಪ್ರಶಿಸುವ ಮನೋಭಾವವಿದೆ ಎಂದು ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಅವರು ವಿ.ಎಂ ಇನಾಂದಾರ್ ವಿಮರ್ಶಾ ಪ್ರಶಸ್ತಿ ಪುರಸ್ಕöÈತರ ಪರಿಚಯ, ಕೃತಿ ವಿಶ್ಲೇಷಣೆ ಗೈದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಛಲ, ಪರಿಶ್ರಮ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕವಿ ಮುದ್ದಣ ಸಾಕ್ಷಿ ಎಂದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಎಂ. ವಿಶ್ವನಾಥ ಪೈ ಮಾತನಾಡಿ ಮುದ್ದಣನ ಎಲ್ಲಾ ಕೃತಿಗಳ ಡಿಜಿಟಲೀಕರಣವಾಗಬೇಕು ಎಂದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಾಲತಿ ದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತ್ರಿವೇಣಿ ಪ್ರಶಸ್ತಿ ಪತ್ರ ವಾಚಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಅಂಬಿಕಾ ನಿರೂಪಿಸಿದರು. ಶ್ರೀಧರ ರಾವ್ ವಂದಿಸಿದರು.

Tuesday, April 14, 2026

ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

 

ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ 

7ನೇ ತರಗತಿಯಿಂದ 10ನೇ ತರಗತಿವರೆಗಿನ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ, ಶಾಲಾ ವಿದ್ಯಾಭ್ಯಾಸ, ಉಚಿತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯಿದೆ. ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೧೦.೦೫.೨೦೨೬

ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ೯೯೦೦೯೦೭೭೦೨/ ೯೯೦೧೧೯೦೩೯೨/ ೯೯೪೫೨೪೫೧೪೪.            

ಡಾ. ಬಿ. ಜಗದೀಶ್ ಶೆಟ್ಟಿ

ಆಡಳಿತಾಧಿಕಾರಿ

Wednesday, April 8, 2026

ವಿ.ಎಂ. ಇನಾಂದಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಕರೆಯೋಲೆ (ದಿನಾಂಕ: 15.04.2026)

 

ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ - ಬೇಸಿಗೆ ಶಿಬಿರ ದಿನಾಂಕ: 16.04.2026 - 25.04.2026

 

ಬೇಸಿಗೆ ಶಿಬಿರ

ಯಕ್ಷಗಾನ ಕೇಂದ್ರ ಇಂದ್ರಾಳಿ, ಮಾಹೆ,  ಇವರ ಆಶ್ರಯದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆ, ವೇಷಭೂಷಣ ಮತ್ತು ಬಣ್ಣಗಾರಿಕೆ ಶಿಬಿರವನ್ನು  ಎಪ್ರಿಲ್ ೧೬, ೨೦೨೬ ರಿಂದ ಎಪ್ರಿಲ್ ೨೫, ೨೦೨೬ರವರೆಗೆ ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೧೨.೩೦ರವರೆಗೆ ನಡೆಸಲಾಗುತ್ತದೆ. ಶಿಬಿರದಲ್ಲಿ ೧೫ ವರ್ಷಕ್ಕೆ ಮೇಲ್ಪಟ್ಟ ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬಹುದೆಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ/ ಹೆಸರು ನೋಂದಣಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಬಹುದು. ೯೯೦೧೧೯೦೩೯೨/ ೯೯೦೦೯೦೭೭೦೨/೯೯೪೫೨೪೫೧೪೪ 

Wednesday, April 1, 2026

ಇನಾಂದಾರ್ ಪ್ರಶಸ್ತಿ’ಗೆ ಡಾ. ಗೀತಾ ವಸಂತ ಅವರ ‘ತೆರೆದಷ್ಟೂ ಅರಿವು’ ವಿಮರ್ಶಾ ಕೃತಿ ಆಯ್ಕೆ

 

ಖ್ಯಾತ ವಿಮರ್ಶಕ ಪ್ರೊ. ವಿ.ಎಂ ಇನಾಂದಾರ್ ಇವರ ನೆನಪಿನಲ್ಲಿ ನೀಡುವ ಇನಾಂದಾರ್ ಪ್ರಶಸ್ತಿಗೆ  ಪ್ರಸಿದ್ಧ ಲೇಖಕಿ, ವಿಮರ್ಶಕಿ ಡಾ. ಗೀತಾ ವಸಂತ ಅವರತೆರೆದಷ್ಟೂ ಅರಿವು ವಿಮರ್ಶಾ ಕೃತಿಯು ೨೦೨೫ರ ಸಾಲಿಗೆ ಆಯ್ಕೆಯಾಗಿದೆಯೆಂದು ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ: ೧೫.೦೪.೨೦೨೬ರಂದು ನಡೆಯುವ ಎಂ.ಜಿ.ಎಂ ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ. 

ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಗೀತಾ ವಸಂತ ಅವರು ಮೂಲತ: ಉತ್ತರ ಕನ್ನಡದ ಕಾಡನಡುವಿನ ಕಾಟೀಮನೆಯವರುಶಿರಸಿಯಲ್ಲಿ ಪದವಿ ಹಾಗೂ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸ್ವಾತಂತ್ರ್ಯೋತ್ತರ ಕನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ  ಹಾಗೂ ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ ಪ್ರಬಂಧಕ್ಕೆ ಡಿ.ಲಿಟ್ ಪದವಿ ಪಡೆದಿದ್ದಾರೆ.

ಕಾವ್ಯ, ಸಣ್ಣಕಥೆ, ವಿಮರ್ಶೆ, ಮಹಿಳಾ ಅಧ್ಯಯನ, ಸಂಸ್ಕöÈತಿ ಅಧ್ಯಯನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹೊಸಿಲಾಚೆ ಹೊಸಹೆಜ್ಜೆ ಮೊದಲ ಕವನ ಸಂಕಲನ. ಚೌಕಟ್ಟಿನಾಚೆಯವರು ಕಥಾಸಂಕಲನ, ಬೆಳಕಿನ ಬೀಜಹೊಸ ದಿಗಂತ ಹೊಸದಾರಿ, ಬೀಜದೊಳಗಣ ವೃಕ್ಷ, ಅಕ್ಷರ ದಾಹ, ತೆರೆದಷ್ಟೂ ಅರಿವು ಮುಂತಾದವು ಅವರ ವಿಮರ್ಶಾ ಕೃತಿಗಳು. ಬೇಂದ್ರೆ  ಕಾವ್ಯದ ಅವಧೂತ ಪ್ರಜ್ಞೆ, ತುಮಕೂರು ಜಿಲ್ಲೆಯ ಮಹಿಳಾ ಲೇಖಲೋಕ, ಕರ್ನಾಟಕದ ಸಂಸ್ಕöÈತಿ ಹಾಗೂ ಸಾಹಿತ್ಯದ ಮೇಲೆ ಅವಧೂತ ಪರಂಪರೆಗಳ ಪ್ರಭಾವ ಇವು ಅವರ ಸಂಶೋಧನೆಗಳು. ಅವಳ ಅರಿವು, ಕನ್ನಡಕ್ಕೊಬ್ಬರೇ ಗೋಕಾಕರು, ಕಂಡವರಿಗಷ್ಟೆ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ ಇವು ಸಂಪಾದಿತ ಕೃತಿಗಳು.

ಸೃಜನಶೀಲ ಬರವಣಿಗೆಯ ಜತೆ ವಿಮರ್ಶೆ, ಸ್ತ್ರೀ ಸಂವೇದನೆ, ಸಂಸ್ಕöÈತಿ ಚಿಂತನೆಗಳೂ ಇವರ ಆಸಕ್ತಿಯ ಕ್ಷೇತ್ರಗಳುರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ  ವಿಚಾರ ಸಂಕಿರಣ, ಸಮ್ಮೇಳನ ಹಾಗೂ ಕಮ್ಮಟಗಳನ್ನು  ಆಯೋಜಿಸಿದ್ದಾರೆ. ಪ್ರಜಾವಾಣಿ, ಸಂಯುಕ್ತ ಕರ್ನಾಟಕ  ಮುಂತಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದಾರೆ. 

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ,  ಡಾ ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪುರಸ್ಕಾರ, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.