Thursday, July 30, 2026

ವೈ .ಕರುಣಾಕರ ಶೆಟ್ಟಿ , ಯಕ್ಷಗಾನ ಮೇಳಗಳ ಯಜಮಾನರಿಗೆ ಯಕ್ಷಪೋಷಕ ಗೌರವ ಪ್ರಶಸ್ತಿ

 

ವೈ. ಕರುಣಾಕರ ಶೆಟ್ಟಿ ಅವರು ಕರಾವಳಿಯ ಹಲವು ಯಕ್ಷಗಾನ ಮೇಳಗಳ ಯಜಮಾನರು ಹಾಗೂ ಹೆಸರಾಂತ ಕಲಾ ಸಂಘಟಕರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ೪೫ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ಅವರು, ಕಳೆದ ೪ ದಶಕಗಳಿಂದ  ಪೆರ್ಡೂರಿನ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ, ಜೊತೆಗೆ ಶ್ರೀ ಕ್ಷೇತ್ರ ಹಾಲಾಡಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಸಿಗಂದೂರು ಮೇಳವನ್ನೂ ಸಮರ್ಥವಾಗಿ ಮುನ್ನಡೆಸುತ್ತಾ ಗುಣಮಟ್ಟದ ಯಕ್ಷಗಾನಪ್ರದರ್ಶನಗಳಿಗೆ ಕಾರಣೀಭೂತರಾಗಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಕಲಾವಿದರ ಬದುಕಿಗೆ ಆಸರೆಯಾಗಿದ್ದವರು. 

ಅವರ ಸುದೀರ್ಘ ಕಲಾಸೇವೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗಮನಿಸಿ ನೂರಕ್ಕೂ ಹೆಚ್ಚು ಸನ್ಮಾನಗಳು ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಯಕ್ಷಗಾನ ಕ್ಷೇತ್ರದ ಅಭಿವೃದ್ಧಿಗೆ  ಇವರು ಸಲ್ಲಿಸಿರುವ ಸೇವೆ ಕರಾವಳಿಯ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಇವರಿಗೆ ೨೦೨೬ನೇ ಸಾಲಿನ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.,) ಉಡುಪಿ ಪ್ರಾಯೋಜಿತ ಯಕ್ಷಪೋಷಕ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಹಯೋಗದೊಂದಿಗೆ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ದಿ. ೨೩.೦೮.೨೦೨೬ರ ಆದಿತ್ಯವಾರದಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ. ಅಂದು ಪ್ರಸಿದ್ಧ ಯಕ್ಷಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಕಾಳಗ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ ಎಂದು ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸೇಡಿಯಾಪು ಪ್ರಶಸ್ತಿ ಕಾರ್ಯಕ್ರಮ, ೨೮.೦೭.೨೦೨೬ ಮೈಸೂರಿನಲ್ಲಿ

 







ಇಂದು ಗ್ರಂಥಸಂಪಾದನೆ, ಸಂಶೋಧನೆಯ ಕೆಲಸಗಳು ಕನ್ನಡದ ಸಂದರ್ಭದಲ್ಲಿ ತುಂಬಾ ನಿಧಾನವಾಗುತ್ತಿವೆ. ಕಾರಣಗಳು ಹಲವಾರು. ಈ ಕ್ಷೇತ್ರದಲ್ಲಿ ಆಸಕ್ತಿವುಳ್ಳವರು ಕಡಿಮೆ ಮತ್ತು ಈ ಕ್ಷೇತ್ರಕ್ಕೆ ಬಂದವರು ಉದ್ಯೋಗಾವಕಾಶವನ್ನು ಬಯಸಿದರೆ ಅದಕ್ಕೆ ಇಂದು ಅವಕಾಶಗಳು ಕಡಿಮೆ. ಹತ್ತಾರು ವರುಷಗಳ ಹಿಂದೆ ತಾತ್ತಿ÷್ವಕಶುದ್ಧತೆಯಿಂದ, ಬದ್ಧತೆಯಿಂದ ಇಂತಹ ಗಹನವಾದ ವಿಚಾರಗಳನ್ನು ಬಹುಗೌರವದಿಂದ ಮಾಡುತ್ತಿದ್ದರು. ಹೀಗಾಗಿ ದಾಸಸಾಹಿತ್ಯದ ಜನಪ್ರಿಯ ಪಠ್ಯ ಹಾಗೂ ಅಧ್ಯಯನಯುಕ್ತ ಸಂಶೋಧನ ಪಠ್ಯಗಳೆಂಬ ಎರಡು ಬಗೆಯ ರೂಪಗಳಲ್ಲಿ ಓದುಗರಿಗೆ ಲಭಿಸುತ್ತಿತ್ತು. ಸಂಶೋಧಿತ ಪಠ್ಯಗಳನ್ನು ಹೊರತರುವಲ್ಲಿ ಅಪಾರ ಶ್ರಮ ಬೇಕಾಗುತ್ತಿತ್ತು. ಕರ್ನಾಟಕದಲ್ಲಿ ಪ್ರೊ. ಜಿ. ವರದರಾಜ ರಾಯರು ದಾಸಸಾಹಿತ್ಯದ ಸಂಶೋಧನೆ ಸಂಪಾದನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು. ಅನಂತರದಲ್ಲಿ ಡಾ. ಟಿ. ಎನ್. ನಾಗರತ್ನ ಅವರು ಆ ಹಾದಿಯಲ್ಲಿ ನಡೆದು ದಾಸಸಾಹಿತ್ಯದ ಅಧಿಕೃತ ಪಠ್ಯಗಳಿಗೆ  ಬುನಾದಿ ಹಾಡಿದರು.  ಸದಾ ಅಧ್ಯಯನಶೀಲರಾದ ಡಾ. ಟಿ.ಎನ್. ನಾಗರತ್ನ ಅವರು ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಮೌಲಿಕ ಕೃತಿಗಳನ್ನು  ನೀಡಿದ್ದಾರೆ.  ಹಾಗಾಗಿ ಅವರ ಹೆಸರು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಂದೂ ಮರೆಯಾಗದು. ಇಂತಹ  ಶ್ರೇಷ್ಠ ಸಂಶೋಧಕಿ, ಗ್ರಂಥ ಸಂಪಾದಕಿಗೆ ಸೇಡಿಯಾಪು ಪ್ರಶಸ್ತಿ ಬಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂಬುದಾಗಿ ನಾಡಿನ ಹಿರಿಯ ವಿದ್ವಾಂಸರೂ, ಸಂಶೋಧಕರು ಆದ ಪ್ರೊ. ಟಿ.ವಿ ವೆಂಕಟಾಚಲ ಶಾಸ್ತ್ರಿ ಹೇಳಿದರು. ಅವರು ಇತ್ತೀಚೆಗೆ ಮೈಸೂರಿನಲ್ಲಿ ಡಾ.ಟಿ.ಎನ್. ನಾಗರತ್ನ ಅವರ ಸ್ವಗೃಹದಲ್ಲಿ  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಮೂಲಕ ಕೊಡಮಾಡುವ ಸೇಡಿಯಾಪು ಪ್ರಶಸ್ತಿ ಪ್ರದಾನಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ನಾಡಿನ ಹಿರಿಯ ವಿದ್ವಾಂಸರೂ, ಸೇಡಿಯಾಪು ಪ್ರಶಸ್ತಿ ಆಯ್ಕೆ ಸಮಿತಿಯ ಹಿರಿಯ ಸದಸ್ಯರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಅಭಿನಂದನಾ ಮಾತುಗಳನ್ನಾಡಿದರು. ಡಾ. ಟಿ.ಎನ್. ನಾಗರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,  ಇಂತಹ ಪ್ರಶಸ್ತಿಗಳು ಜೀವನದ ಸಂಭ್ರಮಗಳಲ್ಲೊಂದು. ಪ್ರಾತ: ಸ್ಮರಣೀಯರಾದ ಸೇಡಿಯಾಪು ಕೃಷ್ಣಭಟ್ಟರ ಹೆಸರಲ್ಲಿ ಪಡೆದ ಈ ಪ್ರಶಸ್ತಿ ನನ್ನ ಪುಟ್ಟ ಸಾಧನೆಗೆ ಗರಿಇಟ್ಟಂತಾಗಿದೆ ಎಂದರು. ಮುಳಿಯ ರಾಘವಯ್ಯ, ಪ್ರೊ. ಎಚ್.ಎಂ. ನಾಗರಾಜ ರಾವ್ ಮುಂತಾದ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಪ್ರಸ್ತಾವನೆಯ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಆರ್.ಆರ್.ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು. ಆರ್.ಆರ್.ಸಿ.ಯ ವಿನೇಶ್ ಅವರು ಕಾರ್ಯಕ್ರಮ ರೂಪಿಸುವಲ್ಲಿ ಸಹಕರಿಸಿದರು.


Wednesday, July 15, 2026

ಗುರು ಮಟಪಾಡಿ ವೀರಭದ್ರ ನಾಯಕ್ ‘ಯಕ್ಷಸಾಧಕ’ ಪ್ರಶಸ್ತಿಗೆ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

  

ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿಯನ್ನು ಯಕ್ಷಗಾನ ಕೇಂದ್ರ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಇವರ  ಸಹಯೋಗದಲ್ಲಿ ಕೊಡಮಾಡಲಿದ್ದು, ೨೦೨೬ನೇ ರ‍್ಷದ ಪ್ರಶಸ್ತಿಗೆ ಖ್ಯಾತ ಯಕ್ಷಗಾನ  ಕಲಾವಿದ ಶ್ರೀಯುತ  ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ ೨೫,೦೦೦/-ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ದಿನಾಂಕ: ೦೧.೦೮.೨೦೨೬ರಂದು ಸಂಜೆ ೪.೦೦ ಗಂಟೆಗೆ, ಉಡುಪಿ ಪುರಭವನದಲ್ಲಿ ನಡೆಯುವ ಕರ‍್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರ‍್ನಾಟಕದ ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸ್ತ್ರೀವೇಷಧಾರಿ ಎಂದೇ ಪ್ರಸಿದ್ಧರಾದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು  ಹೊನ್ನಾವರ ತಾಲೂಕಿನ ಯಲಗುಪ್ಪದಲ್ಲಿ ಶ್ರೀ  ವಿಷ್ಣು ಹೆಗಡೆ ಹಾಗೂ ಶ್ರೀಮತಿ ಇಂದಿರಾ ಹೆಗಡೆಯವರ ಮಗನಾಗಿ ಜನಿಸಿದರು. ಇವರು  ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಅವರ ಯಕ್ಷಗಾನ ಗುರು ಶ್ರೀ ಹೆರಂಜಾಲು ವೆಂಕಟರಮಣ ಗಾಣಿಗರು. ಗುಂಡಬಾಳ ಮೇಳ, ಮಂದರ‍್ತಿ, ಮಾರಣಕಟ್ಟೆ, ಕಮಲಶಿಲೆ, ಸಾಲಿಗ್ರಾಮ, ಹೊಸನಗರ ಮೇಳಗಳಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪರ‍್ಡೂರು ಮೇಳದಲಿ ಯಕ್ಷಗಾನ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಅಲ್ಲದೆ ಯಕ್ಷಗಾನ ಕಲೆಯನ್ನು ಹೊರದೇಶಗಳಲ್ಲಿಯೂ ಪಸರಿಸುವುದಕ್ಕೆ ಕಾರಣರಾಗಿದ್ದಾರೆ.  ಎಲ್ಲಾ ಸ್ತ್ರೀವೇಷಗಳಲ್ಲಿ ಪ್ರಸಿದ್ಧರಾದ ಶ್ರೀ ಹೆಗಡೆಯವರು ಮುಖ್ಯವಾಗಿ ಪ್ರಭಾವತಿ, ಮೇನಕಿ, ರಂಭೆ, ದಾಕ್ಷಾಯಣಿ ಪಾತ್ರಗಳಿಗೆ ಜೀವತುಂಬಿದ್ದಾರೆ. ಯಕ್ಷಗಾನದಲ್ಲಿ ಹರಿವಾಣ ನೃತ್ಯ ಇವರ ವಿಶೇಷತೆಯಾಗಿದೆ. ಯಕ್ಷಗಾನ ಹಾಡುಗಾರಿಕೆ ಹಾಗೂ ಪುರುಷವೇಷಗಳ ನರ‍್ವಹಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ವ್ಯಾಕರಣಶುದ್ಧ  ಶಬ್ದೋಚ್ಚಾರ, ಪ್ರೌಢ ಮಾತುಗಾರಿಕೆ, ಯಕ್ಷಗಾನ ಶೈಲಿಯ ಕಂಠಸ್ವರ, ಪಾತ್ರದ ಚೌಕಟ್ಟಿನೊಳಗೇ ನಿರೂಪಣೆ, ನಾಜೂಕು ಅಭಿನಯದ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅವರನ್ನು ಅನೇಕ ಸಂಸ್ಥೆಗಳು  ಸನ್ಮಾನಿಸಿ  ಗೌರವಿಸಿವೆ.

ಯಕ್ಷನಡಿಗೆ ಶಾಲೆಯೆಡೆಗೆ - ವಿಶ್ವಜ್ಞಾನ ಅನುದಾನಿತ ಹಿ.ಪ್ರಾ.ಶಾಲೆ, ಮುಂಡಾಡಿ, ಕಾಡೂರು ( ದಿನಾಂಕ: ೧೦.೦೭.೨೦೨೬) ಪ್ರಸಂಗ : ಸುಧನ್ವ ಕಾಳಗ

 






ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನ ಕೇಂದ್ರ, ಯಕ್ಷರಂಗ, ಶಿವಪ್ರಭಾ, ಶ್ರೀ ವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ ಉಡುಪಿ ಹಾಗೂ ವಿಶ್ವಜ್ಞಾನ ಅನುದಾನಿತ ಹಿ.ಪ್ರಾ.ಶಾಲೆ, ಮುಂಡಾಡಿ, ಕಾಡೂರು ಇವರ ಸಹಯೋಗದಲ್ಲಿ ಯಕ್ಷಗಾನ ಕೇಂದ್ರ ಯಕ್ಷರಂಗದ ಕಲಾವಿದರಿಂದ ಯಕ್ಷಗಾನ  ಸುಧನ್ವ ಕಾಳಗ ಯಕ್ಷಗಾನ ನಡೆಯಿತು. 

Friday, July 10, 2026

ನಾಡೋಜ ಡಾ . ಕಯ್ಯಾರ ರೈ ಸಮಗ್ರ ಸಂಪುಟ

 ಮನವಿ

£ÁqÉÆÃd qÁ| PÀAiÀiÁågÀ QAtÚ gÉÊ ¸ÀªÀÄUÀæ ¸ÀA¥ÀÅl

 £ÁqÉÆÃd qÁ| PÀAiÀiÁågÀ QAtÚ gÉÊ CªÀgÀÄ F £Ár£À ºÉ¸ÀgÁAvÀ PÀ«, ¸ÁévÀAvÀæ ¸ÉãÁ¤. gÁµÀÖç¥Àæ±À¹Û ¥ÀÅgÀ¸ÀÌöÈvÀ ²PÀëPÀ. ±ÀvÁAiÀÄĶ, PÀ£ÁðlPÀ KQÃPÀgÀtzÀ ºÉÆÃgÁlUÁgÀ. PÀAiÀiÁågÀgÀÄ PÀxÉ, ²±ÀÄVÃvÉ, PÀªÀ£À, £ÁlPÀ, ¥ÀoÀå¥ÀŸÀÛPÀ, ªÁåPÀgÀt, DvÀäPÀxÀ£À, fêÀ£À ZÀjvÉæ, ¸ÀA¸ÀÌöÈvÀ ¨sÁµÁAvÀgÀ gÀÆ¥ÀzÀ°è 37PÀÆÌ ºÉZÀÄÑ ¥ÀŸÀÛPÀUÀ¼À£ÀÄß §gÉzÀÄ ¥ÀæPÀn¹zÁÝgÉ. C®èzÉ ºÀ®ªÀÅ  ©r ¯ÉÃR£ÀUÀ¼À£ÀÄß §gÉ¢zÁÝgÉ. CzÉ®èªÀ£ÀÆß PÉÆæÃrüÃPÀj¹ PÀAiÀiÁågÀgÀ ¸ÀªÀÄUÀæ ¸ÀA¥ÀÅlªÀ£ÀÄß gÀa¸ÀĪÀ AiÉÆÃd£É¬ÄzÉ

DzÀÄzÀjAzÀ, CªÀgÀÄ §gÉzÀ ©r ¯ÉÃR£À, ¨sÁªÀavÀæ, ¨sÁUÀªÀ»¹zÀ ¸À¨sÉ ¸ÀªÀiÁgÀA¨sÀUÀ¼À DªÀÄAvÀæt ¥ÀwæPÉ, ¥ÀwæPÁ vÀÄtÄPÀÄUÀ¼ÀÄ CªÀgÀ PÀÄjvÀ ¯ÉÃR£ÀUÀ¼ÀÄ, PÀ«vÉUÀ¼ÀÄ, ¸ÀA±ÉÆÃzsÀ£Á ¥Àæ§AzsÀUÀ¼ÀÄ ªÀÄvÀÄÛ CªÀgÀ AiÀiÁªÀÅzÉà ¸Á»wåPÀ, KQÃPÀgÀtzÀ ºÉÆÃgÁl, ¸ÁªÀiÁfPÀ PÁAiÀÄðPÀæªÀÄUÀ¼À ªÀÄÄ¢ævÀ CxÀªÁ ºÀ¸ÀÛ°TvÀ §gÀºÀUÀ½zÀݰè vÁªÀÅ zÀAiÀÄ«lÄÖ PɼÀV£À «¼Á¸ÀPÉÌ PÀ¼ÀÄ»¹PÉÆqÀ¨ÉÃPÁV «£ÀAw.

Dr. B. Jagadeesh ShettyAdministrative Officer
RGPai/RRC/KANAKA/YK (MAHE)
MGM College Campus
Post Kunjibettu 576 102
Udupi
Mob:  9448868868
rgpaiudupi@gmail.com

ಸೇಡಿಯಾಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ: 14.07.2026 ಮೈಸೂರಿನಲ್ಲಿ