ಮನವಿ
Friday, July 10, 2026
ನಾಡೋಜ ಡಾ| ಕಯ್ಯಾರ ಸಮಗ್ರ ಸಂಪುಟಕ್ಕೆ ಬಿಡಿಲೇಖನಗಳ ಸಂಗ್ರಹ
Thursday, July 9, 2026
ಯಕ್ಷನಡಿಗೆ ಶಾಲೆಯೆಡೆಗೆ -ಪಿ.ಎಂ. ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ವಾಜೆ, ಕಾರ್ಕಳ ಪ್ರಸಂಗ : ಕಂಸ ವಧೆ ದಿನಾಂಕ: ೦೭.೦೭.೨೦೨೬
ಯಕ್ಷನಡಿಗೆ ಶಾಲೆಯೆಡೆಗೆಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿಯಕ್ಷಗಾನ ಪ್ರಸಂಗ: ಮೈಂದ ದ್ವಿವಿಧ ಕಾಳಗದಿನಾಂಕ: ೯.೭.೨೦೨೬,
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನಕೇಂದ್ರದ ಯಕ್ಷಗಾನಕೇಂದ್ರ / ಯಕ್ಷರಂಗ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಉಡುಪಿ ಇವರ ಸಹಯೋಗದಲ್ಲಿ ಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿ, ಉಡುಪಿ ಜಿಲ್ಲೆ, ದಿನಾಂಕ ೦೯ ಜುಲೈ ೨೦೨೬ (ಗುರುವಾರ) ರಂದು ‘ಮೈಂದದ್ವಿವಿಧ ಕಾಳಗ’ ಯಕ್ಷಗಾನ ಪ್ರಸಂಗವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು.
ಯಕ್ಷನಡಿಗೆ ಶಾಲೆಯೆಡೆಗೆ ಸರ್ಕಾರಿಪದವಿಪೂರ್ವಕಾಲೇಜು ಪ್ರೌಢಶಾಲಾವಿಭಾಗ, ಕುಕ್ಕುಜೆ, ಕಾರ್ಕಳತಾಲೂಕು,ಶಶಿಪ್ರಭಾ ಪರಿಣಯ ೦೮ ಜುಲೈ ೨೦೨೬ (ಬುಧವಾರ)
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಯಕ್ಷಗಾನಕೇಂದ್ರದ ಯಕ್ಷಗಾನಕೇಂದ್ರ/ಯಕ್ಷರಂಗ, ಶಿವಪ್ರಭಾ, ಶ್ರೀವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ, ಉಡುಪಿ ಇವರ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವಕಾಲೇಜು, ಪ್ರೌಢಶಾಲಾವಿಭಾಗ, ಕುಕ್ಕುಜೆ, ಕಾರ್ಕಳತಾಲೂಕು, ಉಡುಪಿಜಿಲ್ಲೆ, ದಿನಾಂಕ ೦೮ ಜುಲೈ ೨೦೨೬ (ಬುಧವಾರ) ರಂದುಪ್ರದರ್ಶಿಸಲಾದ ಪ್ರಸಿದ್ಧ ಯಕ್ಷಗಾನ ಪ್ರಸಂಗ "ಶಶಿಪ್ರಭಾ ಪರಿಣಯ"ವನ್ನು ಅದ್ಭುತವಾಗಿ ಪ್ರದರ್ಶಿಸಲಾಯಿತು.
ಈ ಪ್ರದರ್ಶನವು ಕರ್ನಾಟಕದ ಶಾಸ್ತ್ರೀಯ ಸಾಂಸ್ಕೃತಿಕ ಪರಂಪರೆಯ ಸಾರಸತ್ವವನ್ನು ಸಾರ್ಥಕವಾಗಿ ಪ್ರತಿಬಿಂಬಿಸಿತು. ಪಾಂಡಿತ್ಯ, ಸೌಂದರ್ಯಾನುಭೂತಿ, ನಾಟಕೀಯ ವೈಭವ, ಲಯಬದ್ಧ ನಿಖರತೆ ಹಾಗೂ ಕಲಾತ್ಮಕ ಉತ್ಕರ್ಷಗಳ ಅಪೂರ್ವಸಂಗಮವನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಯಿತು. ಪ್ರತಿಯೊಂದು ದೃಶ್ಯವೂ ಅಪಾರ ಶಿಷ್ಟತೆ, ಸಹಜತೆ ಹಾಗೂ ನೈಜತೆಯಿಂದ ಅನಾವರಣಗೊಂಡಿತು. ವಿಶೇಷವಾಗಿ ಭಾಗವತಿಕೆ, ಅಭಿನಯ, ನೃತ್ಯ, ಸಂಭಾಷಣೆ, ಹಿಮ್ಮೇಳ ಹಾಗೂ ರಂಗಭೂಮಿ ವಿನ್ಯಾಸಗಳಲ್ಲಿತಂಡವು ತೋರಿದ ಪರಿಪೂರ್ಣ ಪಾಂಡಿತ್ಯವು ನಮ್ಮ ನಾಗರಿಕ ಪರಂಪರೆಯ ಅವಿಸ್ಮರಣೀಯ ಸಂಭ್ರಮವನ್ನಾಗಿ ರೂಪಿಸಿತು.
ಈ ಪ್ರದರ್ಶನವು ಕೇವಲ ಒಂದು ನಾಟಕೀಯ ಪ್ರದರ್ಶನವಾಗಿರದೆ, ಅತ್ಯಂತ ಪರಿಣಾಮಕಾರಿ ಶೈಕ್ಷಣಿಕ ಅನುಭವವಾಗಿತ್ತು. ಇದು ನಮ್ಮ ವಿದ್ಯಾರ್ಥಿಗಳಲ್ಲಿ ಆಳವಾದ ಬೌದ್ಧಿಕ, ನೈತಿಕ ಹಾಗೂ ಸಾಂಸ್ಕೃತಿಕ ಅರಿವನ್ನು ಮೂಡಿಸಿತು. ಯಕ್ಷಗಾನದ ಶಾಶ್ವತಮೌಲ್ಯಗಳ ಬಗ್ಗೆ ಗೌರವ ಭಾವವನ್ನು ಬೆಳೆಸುವುದರೊಂದಿಗೆ, ಅವರ ಸೌಂದರ್ಯಪ್ರಜ್ಞೆಯನ್ನು ಸಮೃದ್ಧಗೊಳಿಸಿ, ಸಾಂಸ್ಕೃತಿಕ ಜಾಗೃತಿಯನ್ನು ಬಲಪಡಿಸಿ, ಸಮಕಾಲೀನ ಸಮಾಜದಲ್ಲಿಯೂ ನಮ್ಮ ದೇಶೀಯ ಕಲಾ ಪರಂಪರೆಗಳ ನಿರಂತರ ಪ್ರಸ್ತುತತೆಯನ್ನು ಪುನರುಚ್ಚರಿಸಿತು.ತಂಡದ ಅತ್ಯಂತ ಶಿಸ್ತಿನ ಸಂಘಟನೆ, ಅಚಲ ಬದ್ಧತೆ, ಪಾಂಡಿತ್ಯಪೂರ್ಣ ವ್ಯಾಖ್ಯಾನ, ಕಲಾತ್ಮಕ ಪರಿಪೂರ್ಣತೆ ಹಾಗೂ ಈ ವೈಭವಶಾಲಿ ಜಾನಪದ ರಂಗಪರಂಪರೆಯ ಪಾವಿತ್ರ್ಯ ಮತ್ತು ಭವ್ಯತೆಯನ್ನು ಉಳಿಸಿ ಬೆಳೆಸುವ ನಿಸ್ವಾರ್ಥ ಸಮರ್ಪಣೆ ಆಳವಾಗಿ ಪ್ರಭಾವಿತಗೊಳಿಸಿದ್ದಲ್ಲದೆ, ಅವರ ಅತ್ಯುನ್ನತ ಕಲಾನೈಪುಣ್ಯ ಹಾಗೂ ಆದರ್ಶಪ್ರಾಯ ಸಮರ್ಪಣೆ ಸಾಂಸ್ಕೃತಿಕ ಸಂರಕ್ಷಣೆಯ ಶ್ರೇಷ್ಟ ಮಾದರಿಯಾಗಿ ಸದಾಸ್ಮರಣೀಯವಾಗಿ ಉಳಿಯುವಂತದ್ದಾಗಿದ್ದು ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿ ಸಂತೋಷಪಟ್ಟುದುದಲ್ಲದೆ ಪ್ರತಿಷ್ಠಿತ ಸಂಸ್ಥೆಯು ತನ್ನ ಅಚಲ ಶ್ರೇಷ್ಟತೆಯ ಮೂಲಕ ಭಾರತದ ಅತ್ಯಂತ ವೈಭವಯುತ ಪ್ರದರ್ಶನ ಕಲೆಗಳಲ್ಲೊಂದಾದ ಯಕ್ಷಗಾನದ ಬೆಳಕನ್ನು ಮುಂದಿನ ಪೀಳಿಗೆಗಳಿಗೂ ನಿರಂತರವಾಗಿ ಹರಡುತ್ತಾ, ಸಾಂಸ್ಕೃತಿಕ ಗಗನವನ್ನು ಇನ್ನಷ್ಟು ಪ್ರಭಾಮಯಗೊಳಿಸಲಿ ಎಂದು ಶುಭ ಹಾರೈಸಿದರು.
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಕಾರ್ಯಕ್ರಮ ಪಿ.ಪಿ.ಸಿಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ (೦೬.೦೭.೨೦೨೬)
ಯಕ್ಷನಡಿಗೆ ಶಾಲೆಯೆಡೆಗೆ ಶೀರ್ಷಿಕೆಯಡಿ ಉಡುಪಿ ಪೂರ್ಣಪ್ರಜ್ಞ ಕಾಲೇಜು, ಯಕ್ಷಗಾನ ಕೇಂದ್ರ, ಯಕ್ಷರಂಗ, ಶಿವಪ್ರಭಾ, ಶ್ರೀ ವಾದಿರಾಜ ವನಂ, ಹಯಗ್ರೀವ ನಗರ, ಇಂದ್ರಾಳಿ ಉಡುಪಿ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿ ವೇದಿಕೆ ಕನ್ನಡ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ಕೇಂದ್ರ ಯಕ್ಷರಂಗದ ಕಲಾವಿದರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು.
ಯಕ್ಷಗಾನ ಕೇಂದ್ರದ ಭಾಗವತ ಗುರು ಉಮೇಶ್ ಸುವರ್ಣ, ಗೋಪಾಡಿ ಚೆಂಡ-ಮದ್ದಳೆ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ, ಯಕ್ಷಗುರು ಬಸವ ಮುಂಡಾಡಿ ಕಲಾವಿದರು ಒಗ್ಗೂಡಿ ಯಕ್ಷಗಾನದ ಗಣಪತಿ ಸ್ತುತಿ, ಕೋಡಂಗಿ ಬಾಲಗೋಪಾಲಮತ್ತು ರಾಜವೇಷದ ಒಡ್ಡೋಲಗ ಪಯಣ, ಕುಣಿತ, ಯುದ್ಧ, ನೃತ್ಯ ಗಂಡುಬಣ್ಣದ ವೇಷದ ಒಡ್ಡೋಲಗ ಮೊದಲಾದ ವಿಭಾಗಗಳ ಪ್ರಾತ್ಯಕ್ಷಿಕೆ ನಡೆಯಿತು
ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟಿ, ಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್. , ಐಕ್ಯುಎಸಿ ಸಂಯೋಜಕ ಡಾ.ವಿನಯ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಹಗೂ ಪ್ರಾತ್ಯಕ್ಷಿಕೆ ಸಂಯೋಜಕ ಡಾ. ಶಿವಕುಮಾರ್ ಅಳಗೋಡು ಸ್ವಾಗತಿಸಿ ನಿರೂಪಿಸಿದರು.
Tuesday, July 7, 2026
ಯಕ್ಷಗಾನ ದಾಖಲೀಕರಣ ಉದ್ಘಾಟನೆ ಹಾಗೂ ವೀರವೃಷಸೇನ ಪುಂಡುವೇಷ ದಾಖಲೀಕರಣ (05.07.2026)
ದಾಖಲೀಕರಣ:
Tuesday, June 30, 2026
ಉಡುಪಿ ಯಕ್ಷಗಾನ ಕೇಂದ್ರ ಸಲಹಾ ಸಮಿತಿಯಿಂದ ಹುಟ್ಟು ಹಬ್ಬ ಆಚರಣೆ (೨೫.೦೬.೨೦೨೬)
ಮಾಹೆ ಸಂಯೋಜಿತ ಉಡುಪಿ ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಲಹಾ ಸಮಿತಿಯಿಂದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳರ 85ನೇ ಜನ್ಮದಿನೋತ್ಸವವನ್ನು ಜೂನ್ 25ರಂದು ಆಚರಿಸಲಾಯಿತು.
ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಪಳ್ಳಿ ಕಿಶನ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಭುವನ ಪ್ರಸಾದ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿ, ಲಿಂಗ ಸಮಾನತೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದ ಮಾಹೆಯನ್ನು ಅಭಿನಂದಿಸಿದರು.
ಯಕ್ಷಸ್ಮರಣಿಕೆ, ಶಾಲು, ಹಾರ, ಪೇಟ ತೊಡಿಸಿ ಡಾ. ಬಲ್ಲಾಳರನ್ನು ಅಭಿನಂದಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಡಾ. ಬಲ್ಲಾಳರು, ಮಾಹೆ ಸದಾ ಯಕ್ಷಗಾನ ಕೇಂದ್ರವನ್ನು ಪ್ರೋತ್ಸಾಹಿಸುತ್ತದೆ ಎಂದರು. ಸದಸ್ಯರಾದ ಮೀನಾ ಲಕ್ಷ್ಮಣಿ ಮತ್ತು ಡಾ. ಶೈಲಜಾ ಭಟ್, ಶ್ರೀ ವಿಶ್ವನಾಥ ಶೆಣೈ, ಪ್ರೊ. ಎಸ್. ವಿ. ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಮಂಜುನಾಥ ಮಯ್ಯ ವಂದಿಸಿದರು.






.jpg)


