ಯುದ್ಧ
ವಿರೋಧಿ
ನೀತಿಯು
ಈ ಕೃತಿಯ
ಒಟ್ಟು
ಆಶಯವಾಗಿದೆ.
ಯುದ್ಧ
ಸಂದರ್ಭದಲ್ಲಿ
ಅರ್ಥ
ವ್ಯವಸ್ಥೆ
ಮಾರುಕಟ್ಟೆ
ನೀತಿ,
ನಿರೂಪಕರು
ಸಮಾಜದ
ಜನರ
ಬದುಕಿನಲ್ಲಿ
ಚೆಲ್ಲಾಟವಾಡುತ್ತಾರೆ
ಎಂಬುದನ್ನು
ಬಿಂಬಿಸುತ್ತದೆ.
ಶಾಲೆ,
ಆಸ್ಪತ್ರೆಗಳ
ಮೇಲೆ
ದಾಳಿ
ಮಾಡಬಾರದೆನ್ನುವ
ನೀತಿ
ನಿಯಮಗಳಿದ್ದರೂ
ಯುದ್ಧ
ಆರಂಭವಾದರೆ
ಎಲ್ಲಾ
ನೀತಿ
ನಿಯಮಗಳನ್ನು
ಗಾಳಿಗೆ
ತೂರಲಾಗುತ್ತಿದೆ.
ಇದು
ಮಹಾಭಾರತ
ಕಾಲದಿಂದಲೂ
ನಡೆದು
ಬಂದಿದೆ
ಎಂದು
ಲೇಖಕಿ
ಡಾ.
ಮಾಧವಿ
ಭಂಡಾರಿ
ವಿಷಾದಿಸಿದ್ದಾರೆ.
ಅವರು
ದಿನಾಂಕ
೨೯.೦೮.೨೦೨೬,
ಶನಿವಾರದಂದು
ರಾಷ್ಟ್ರಕವಿ
ಗೋವಿಂದ
ಪೈ
ಸಂಶೋಧನಾ
ಕೇಂದ್ರ,
ಮಣಿಪಾಲ
ಅಕಾಡೆಮಿ
ಆಫ್
ಹೈಯರ್
ಎಜ್ಯುಕೇಶನ್ ಹಾಗೂ
ಕಡೆಂಗೋಡ್ಲು
ಕಾವ್ಯ
ಪ್ರಶಸ್ತಿ ಸಮಿತಿ
ಸಹಯೋಗದಲ್ಲಿ
ಎಂ.ಜಿ.ಎಂ
ಕಾಲೇಜಿನ
ಆವರಣದಲ್ಲಿರುವ
ಧ್ವನ್ಯಾಲೋಕ
ಸಭಾಂಗಣದಲ್ಲಿ
ಕಡೆಂಗೋಡ್ಲು
ಕಾವ್ಯ
ಪ್ರಶಸ್ತಿಗೆ
ಆಯ್ಕೆಯಾದ ‘ಗೋಡೆಗೆ
ನೇತು
ಬಿದ್ದ
ಭೂಪಟ’
ಕವನ
ಸಂಕಲನ
ಬಿಡುಗಡೆಗೊಳಿಸಿ
ಮಾತನಾಡುತ್ತಿದ್ದರು.
ಲಕ್ಷ್ಮಣ
ವಿ.ಎ
ಅವರ
ಕೃತಿಯಲ್ಲಿನ
ಕವಿತೆಗಳು
ಭ್ರಮೆ
ಮತ್ತು
ವಾಸ್ತವದ
ನಡುವೆ
ಜೀಕಾಡುತ್ತವೆ.
ಆದರೂ
ವಾಸ್ತವವೇ
ಕವಿತೆಗಳ
ಜೀವಾಳವಾಗಿದೆ
ಎಂದರು.
ಬೆಳಗಾವಿಯ
ಡಾ.
ಲಕ್ಷ್ಮಣ ವಿ.ಎ
ಅವರು
ಕಡೆಂಗೋಡ್ಲು
ಕಾವ್ಯ
ಪ್ರಶಸ್ತಿ
ಸ್ವೀಕರಿಸಿ
ಮಾತನಾಡಿ,
ಶಿಫಾರಸು, ಅಡ್ಡ
ದಾರಿ
ಹಿಡಿದು
ಪ್ರಶಸ್ತಿಗಳ
ಘನತೆಹಾಳು
ಮಾಡಬಾರದು.
ಕಡೆಂಗೋಡ್ಲು
ಶಂಕರ
ಭಟ್ಟರ
ಹೆಸರಿನಲ್ಲಿ
ನೀಡುವ
ಪ್ರಶಸ್ತಿಗೆ
ಭಾಜನವಾಗಿರುವುದು
ನನ್ನ
ಕಾವ್ಯಕ್ಕೆ
ಸಂದ
ಗೌರವ
ಎಂದರು.
ಅಧ್ಯಕ್ಷತೆ
ವಹಿಸಿದ್ದ
ಎಂ.ಜಿ.ಎಂ
ಪದವಿ
ಕಾಲೇಜಿನ
ಪ್ರಾಂಶುಪಾಲೆ
ಡಾ.
ಗಾಯತ್ರಿ
ಜಿ.
ಪೈ
ಮಾತನಾಡಿ
‘ಸಾಹಿತ್ಯ
ಬರಹಗಳು
ಸಮಾಜಪರ
ಧ್ವನಿಯಾಗಬೇಕು.
ಸಾಮಾಜಿಕ
ಜಾಲತಾಣ,
ಒತ್ತಡ,
ತಂತ್ರಜ್ಞಾನ,
ವೇಗದ
ಬದುಕಿನ
ನಡುವೆ
ಸಾಹಿತ್ಯದ
ಅಗತ್ಯ
ಹೆಚ್ಚಾಗಿದೆ.
ಹಿರಿಯ
ಸಾಹಿತಿ,
ಲೇಖಕರ
ಸಾಹಿತ್ಯದ
ಮೌಲ್ಯಗಳನ್ನು
ಬದುಕಿನಲ್ಲಿ
ಅಳವಡಿಸಿಕೊಳ್ಳೋಣ.
ಸಮಾಜ
ಸಂವೇದನಾಶೀಲವಾಗಲಿ
ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರವಿರಾಜ್ ಶೆಟ್ಟಿ ಅವರು ಮಾತನಾಡಿ, ಕಡೆಂಗೋಡ್ಲು ಶಂಕರ ಭಟ್ಟರು ವಾಗ್ಮಯ ತಪಸ್ವಿಯಾಗಿದ್ದು, ಅವರ ಕಾವ್ಯವು ವಾಙ್ಮಯ ತಪಸ್ಸಾಗಿದೆ ಎಂದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಆರ್.ಸಿಯ ಸಹಾಯಕ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿನಿ ಕು. ಚೈತನ್ಯಾ ಎನ್ ಪ್ರಾರ್ಥಿಸಿದರು. ಕಡೆಂಗೋಡ್ಲು ಶಂಕರ ಭಟ್ಟರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.



