ಪರಂಪರೆಯ ಅರಿವು, ಅನುಭವ ತಿಳುವಳಿಕೆಯನ್ನು ಬಿಟ್ಟು ಸಮಾಜ, ದೇಶವನ್ನು ಕಟ್ಟಲಾಗದು ಎಂದು ಡಾ ಬಿ.ಎ ವಿವೇಕ ರೈ ಹೇಳಿದರು. ಅವರು ದಿನಾಂಕ ೧೨.೦೯.೨೦೨೬ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಕೊಡಮಾಡುವ ಶ್ರೀಮತಿ ಆಶಾ ಕುತ್ಯಾರ್ ಹಾಗೂ ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ. ಕು.ಶಿ ಹರಿದಾಸ ಭಟ್ಟರ ಸ್ಮರಣಾರ್ಥ ನೀಡಲಾಗುವ ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ ಹಾಗೂ ಡಾ. ಯು. ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಕೋಟಿ, ಟ್ರೆಲಿಯನ್ ಆರ್ಥಿಕತೆಯಿದ್ದರೂ ಭಾಷೆ, ಸಾಹಿತ್ಯ, ಸಂಸ್ಕೃತಿ ತಿಳಿಯದಿದ್ದರೆ ಏನು ಪ್ರಯೋಜನ?ಹಣದಿಂದ ಎಲ್ಲವನ್ನೂ ಕಟ್ಟಲಾಗದು. ವಿದ್ವತ್ ಪರಂಪರೆ ಕ್ಷೀಣಿಸುತ್ತಿದ್ದು ಹೊಸ ಪರಂಪರೆಯನ್ನು ಜೋಡಿಸಬೇಕು. ಮನೋಧರ್ಮವಿಲ್ಲದೆ ಸಂಶೋಧನೆ ಸಾಧ್ಯವಾಗದು. ಸಂಸ್ಕೃತಿಯ ಒಳಹೋಗಿ ಸಂಶೋಧನೆ, ಅಧ್ಯಯನ ಮುಂದುವರಿಯಬೇಕು ಎಂದರು.
ದೇಶದ
ಜೆನ್ಜಿ ಹಿಂದಿನ
ಪರಂಪರೆ ಅಳವಡಿಸಿ ಮುಂದುವರಿಸುವ ಆಸಕ್ತಿ
ವಹಿಸಬೇಕಿದೆ. ವಿದ್ಯಾರ್ಥಿಗಳು ಹೆಚ್ಚು ಓದುವ ಮೂಲಕ
ಜ್ಞಾನವೃದ್ಧಿಸಿಕೊಂಡು ಹೊಸತನ ಅಳವಡಿಸಿಕೊಳ್ಳಬೇಕು ಎಂದು
ಹೇಳಿದರು. ಜೀವನದಲ್ಲಿ ಪ್ರತಿದಿನ ಹೊಸ
ಹೆಜ್ಜೆಗಳನ್ನು ಇಡಬೇಕು. ಇಂದಿನ ಕಾಲಘಟ್ಟದಲ್ಲಿ
ಹೊಸ ಪೀಳಿಗೆಗೆ ಪ್ರೊ.
ಕೆ.ಪಿ ರಾವ್ ಹಾಗೂ
ಕನರಾಡಿ ವಾದಿರಾಜ ಭಟ್ಟರು ಮಾದರಿ
ಮತ್ತು ಪ್ರೇರಕರಾಗಿದ್ದಾರೆ ಎಂದರು.
೨೦೨೬ನೇ
ಸಾಲಿನ ಕು.ಶಿ
ಜಾನಪದ ಪ್ರಶಸ್ತಿಯನ್ನು ಹಿರಿಯ
ಜಾನಪದ ತಜ್ಞ ಡಾ. ಕನರಾಡಿ
ವಾದಿರಾಜ ಭಟ್ ಅವರಿಗೆ, ೨೦೨೫ನೇ
ಸಾಲಿನ ಡಾ. ಯು.ಪಿ
ಉಪಾಧ್ಯಾಯ ಹಾಗೂ ಡಾ. ಸುಶೀಲಾ
ಪಿ. ಉಪಾಧ್ಯಾಯ ಪ್ರಶಸ್ತಿಯನ್ನು
ಗಣಕತಂತ್ರಜ್ಞ ಪ್ರೊ. ಕೆ.ಪಿ
ರಾವ್ ಅವರಿಗೂ ಪ್ರದಾನ ಮಾಡಲಾಯಿತು.
ಪ್ರಶಸ್ತಿ
ಪುರಸ್ಕೃತ ಡಾ.
ಕನರಾಡಿ ವಾದಿರಾಜ ಭಟ್ ಮಾತನಾಡಿ ’ನನಗೆ ಜಾನಪದ ವಿಷಯವಾಗಿ ಬೆಳಕು
ತೋರಿದವರು ಪ್ರೊ.ಬಿ.ಎ
ವಿವೇಕ ರೈ ಅವರು.
ನನ್ನ ಎಲ್ಲಾ ಜಾನಪದ ಗುರುಗಳು
ಮತ್ತು ವಿದ್ಯಾರ್ಥಿಗಳ ಪರವಾಗಿ ಈ
ಪ್ರಶಸ್ತಿ ಸ್ವೀಕರಿಸಿದ್ದೇನೆ. ಮುಂದೆ ಜಾನಪದ ಕೃತಿ
ಪ್ರಕಟಿಸುವ ವೇಳೆ ಈ ಪ್ರಶಸ್ತಿ
ಹಣವನ್ನು ಕು.ಶಿ
ಅವರ ಹೆಸರಿನಲ್ಲಿ ಸಮರ್ಪಿಸುತ್ತೇನೆ.
ಹಳ್ಳಿಯ ಜನಪದರ ವಿದ್ವತ್ತು ಗುರುತಿಸುವ
ಪ್ರವೃತ್ತಿ ಹೆಚ್ಚಬೇಕು ಎಂದರು.
ಹಿರಿಯ ವಿದ್ವಾಂಸ ರಾಘವ ನಂಬಿಯಾರ್ ಪ್ರೊ. ಕೆ.ಪಿ ರಾವ್ ಅವರ ಕುರಿತು ಹಾಗೂ ಡಾ. ಚಂದ್ರಾವತಿ ಡಾ. ಕನರಾಡಿ ವಾದಿರಾಜ ಭಟ್ ಅವರ ಕುರಿತಾಗಿ ಅಭಿನಂದನ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ.ಪೈ ಕಾರ್ಯಕ್ರಮಕ್ಕೆ ಶುಭ ಹಾರಯಿಸಿದರು. ಕು.ಶಿ ಹರಿದಾಸ ಭಟ್ ಹಾಗೂ ಉಪಾಧ್ಯಾಯ ದಂಪತಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಯಕ್ಷಗಾನ ಕೇಂದ್ರದ ಗುರುಗಳಾದ ಶ್ರೀ ಉಮೇಶ್ ಸುವರ್ಣ ಯಕ್ಷಗಾನ ಪದ್ಯ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

