ಧ್ಯಾನಸ್ಥ ಸ್ಥಿತಿಯಲ್ಲಿ ಚಿಂತನೆ ಮಾಡುವುದು ಆಧ್ಯಾತ್ಮವಾಗಿದೆ. ಆದರೆ ಇಂದು ಆಧ್ಯಾತ್ಮ ಕೂಡ ವ್ಯಾಪಾರದ ಸರಕಾಗಿದೆ.ಯಾವುದು ಜನರನ್ನು ಹೆಚ್ಚು ತಲುಪುತ್ತದೋ ಅದನ್ನು ವಾಣಿಜ್ಯ ಸರಕಾಗಿ ಬಳಸಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿಹಾಗೂ ಹಿರಿಯ ವಿದ್ವಾಂಸರಾದ ಡಾ.ಬಿ. ಎ. ವಿವೇಕ ರೈ ಅಭಿಪ್ರಾಯ ಪಟ್ಟರು. ಅವರು ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಮತ್ತು ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಡಿಸೆಂಬರ್ ೬ ಮತ್ತು ೭,೨೦೨೫ರಂದು ಎಂ.ಜಿ.ಎಂ ಕಾಲೇಜು ಆವರಣದ ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರಾವಳಿ ಭಜನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ತಂತ್ರಜ್ಞಾನ ಆಧಾರಿತ ಸಂವಹನ ವಿಧಾನಗಳಿವೆ. ಆದ್ದರಿಂದ ಮನುಷ್ಯರು ಗೌಣವಾಗುತ್ತಾರೆ. ಭಜನೆ ಬೇಕಿದ್ದರೂ ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಸಿಗುತ್ತದೆ. ಮುಂದಿನ ೧೫ ವರ್ಷಗಳಲ್ಲಿ ಎಐ ನಮ್ಮನ್ನು ಆಳಲಿದೆ ಎಂದರು. ನಿಜಜೀವನದಲ್ಲಿ ಅನುಸರಿಸಬೇಕಾದ ಜೀವನ ಸಂಗತಿಗಳೇ ತತ್ವಪದಗಳಲ್ಲಿ ಅಡಕವಾಗಿವೆ. ಧರ್ಮ ಸಾಮರಸ್ಯ, ಲಿಂಗ, ಜಾತಿತಾರತಮ್ಯಕ್ಕೆ ವಿರೋಧ ಆಧುನಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಮೊದಲಾದವುಗಳು ವಿಡಂಬನೆಯ ರೂಪದಲ್ಲಿ ಅವುಗಳಲ್ಲಿ ಮೂಡಿಬಂದಿವೆ ಎಂದರು.
ಒಂದು ಕಾಲದಲ್ಲಿ ಭಜನೆ ಮನೆಮನೆಗಳಲ್ಲಿ ನಡೆಯುತ್ತಿತ್ತು. ಸಾಹಿತ್ಯ ಸಂಗೀತದ ಅವಿನಾಭಾವದ ಸೇರುವಿಕೆ ಭಜನೆಯಲ್ಲಿದೆ. ಇಂದು ಡಿ.ಜೆ., ಎ.ಐ ಸವಾಲುಗಳ ನಡುವೆ ಭಜನೆಯ ಮೂಲಕ ಅನುಭಾವ, ಆಧ್ಯಾತ್ಮ ಮತ್ತು ಉತ್ತಮ ಸಂಸ್ಕöÈತಿ ಜನರಿಗೆ ತಲುಪಬೇಕಿದೆ. ತತ್ವಪದವನ್ನು ಭಜನೆಯ ಮೂಲಕ ಅಳವಡಿಸಿ, ಪ್ರಚುರಪಡಿಸಬೇಕಿದೆ’ ಎಂದು ಪ್ರತಿಪಾದಿಸಿದರು.
ಮಾಹೆಯ ಸಹ ಕುಲಪತಿ ನಾರಾಯಣ ಸಭಾಹಿತ್ ಮಾತನಾಡಿ, ಬದಲಾವಣೆ ನಿರಂತರವಾದುದು. ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಜನೆಯಲ್ಲಿ ಕೂಡ ಬದಲಾವಣೆಗಳಾಗಿವೆ. ಮಹಾನಗರಗಳಲ್ಲಿ ಭಜನೆ ಬೇರೆಯೇ ರೂಪ ಪಡೆದುಕೊಳ್ಳುತ್ತಿರುವುದು ದುರಂತ ಎಂದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ವಸಾಹತುಶಾಹಿ ಸಂದರ್ಭದಲ್ಲಿ ಸಾಮಾಜಿಕ ಸಂಘರ್ಷಗಳು ಸಮಸ್ಯೆಗಳು ಸಾಕಷ್ಟು ಎದುರಾಗಿದ್ದವು. ಅಂತಹ ಸಂದರ್ಭದಲ್ಲಿ ತತ್ವಪದಕಾರರು ಬದುಕಿಗೆ ಮುಖಾಮುಖಿಯಾದರು ಎಂದು ಹೇಳಿದರು.
ಬದುಕಿನ ನಿಜರೂಪಗಳನ್ನು ಒಳಗೊಂಡ ತತ್ವಪದಗಳು ತನ್ನ ಗೇಯಪ್ರಧಾನವಾದ ಸಂಗೀತದಿಂದ ಜನರನ್ನು
ತಲುಪಿದವು. ಆದರೆ ೭೦ರ ದಶಕದವರೆಗೂ ಈ ಪ್ರಕಾರವನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸ ಎಂದರು. ನಾವು ಈಗಾಗಲೇ ತತ್ವಪದಗಳ ೫೦ ಸಂಪುಟಗಳನ್ನು ಹೊರತಂದಿದ್ದೇವೆ. ಬಿಟ್ಟುಹೋಗಿರುವ ತತ್ವಪದಗಳನ್ನು
ಸಂಗ್ರಹಿಸಿ ಮತ್ತೆ ಪ್ರಕಟಿಸಲಿದ್ದೇವೆ. ಪಾರಿಭಾಷಿಕ ಪದಕೋಶ ಎಂಬ ಬೃಹತ್ ಸಂಪುಟವನ್ನೂ ಹೊರತರುತ್ತಿದ್ದೇವೆ ಎಂದರು.
ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ, ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ಎಸ್. ನಾಯ್ಕ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಯಕ್ರಮ ಸಂಯೋಜಿಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಇದರ ಸದಸ್ಯ ಸಂಚಾಲಕರಾದ ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು. ರಾಮಾಂಜಿ ಮತ್ತು ಸ್ವಪ್ನ ರಾಜ್ ನಾಡಗೀತೆ ಹಾಡಿದರು.
ಉದ್ಘಾಟನಾ ಸಮಾರಂಭದ ಬಳಿಕ ೯ ಭಜನಾ ತಂಡಗಳು ಭಾಗವಹಿಸಿದ್ದವು.
೧. ಮಹಾಲಕ್ಷ್ಮಿ ಮೊಗವೀರ ಭಜನಾ ಮಂಡಳಿ, ಕೊಡವೂರು
೨. ರಾಗರಂಜನಿ ತಂಡ ಕುಂಜಿಬೆಟ್ಟು
೩. ಶ್ರೀ ಮಹಾಗಣಪತಿ ಭಜನಾ ಮಂಡಳಿ, ತೊಂಭತ್ತು
೪. ಜಿ.ಎಸ್.ಬಿ ಮಹಿಳಾ ಮಂಡಳಿ, ಉಡುಪಿ
೫. ಶ್ರೀ ಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾಮಂಡಳಿ, ಕಿರಾಡಿ
೬. ಯಕ್ಷಿ ಕಲ್ಲುಕುಟಿಗ ಭಜನಾ ಮಂಡಳಿ, ಕೋಟೇಶ್ವರ
೭. ದುರ್ಗಾಪರಮೇಶ್ವರಿ ಭಜನಾಮಂಡಳಿ, ಅಂಜಾರು, ಹಿರಿಯಡ್ಕ
೮. ಸರ್ವೇಶ್ವರಿ ಭಜನಾಮಂಡಳಿ, ಹೊನ್ನಾವರ
೯. ಬಾಲವಿಕಾಸ ಭಜನಾಮಂಡಳಿ, ಹೊಸಬೆಟ್ಟು, ಸುರತ್ಕಲ್
ಡಿಸೆಂಬರ್ ೭, ೨೦೨೫ರಂದು ೪ ತಂಡಗಳು ಭಾಗವಹಿಸಿದ್ದವು
೧೦. ಶ್ರೀ ವೀರಭದ್ರ ಗುರು ಮಾಚಿದೇವ ಭಜನಾಮಂಡಳಿ, ಕಾರ್ಕಳ
೧೧. ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ಕರಂದಾಡಿ
೧೨. ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ, ಪಾಂಡೇಶ್ವರ, ಸಾಸ್ತಾನ
೧೩. ರಂಗಚಿನ್ನಾರಿಯ ಸ್ವರಚಿನ್ನಾರಿ ಭಜನಾಮಂಡಳಿ, ಕಾಸರಗೋಡು
ಶ್ರೀ ರಮೇಶ್ ಕಲ್ಮಾಡಿ ಹಾಗೂ ಶ್ರೀಮತಿ ಜ್ಯೋತಿ ದೇವಾಡಿಗ ಭಾಗವಹಿಸಿದ ಭಜನಾ ತಂಡಗಳನ್ನು ಪರಿಚಯಿಸಿ ಅವರು ಹಾಡಿದ ಭಜನೆಗಳ ವಿಶ್ಲೇಷಣೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ ಪ್ರತಿಭಾ ಎಂ.ಎಲ್. ಸಾಮಗ ಸಮಾರೋಪ ಭಾಷಣ ಮಾಡಿದರು. ಶ್ರೀ ಕಾ.ತ. ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ. ಜಗದೀಶ್ ಶೆಟ್ಟಿ ಹಾಗೂ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.
No comments:
Post a Comment